ಪಟ್ಟಣ ವ್ಯಾಪಾರ ಸಮಿತಿ ಚುನಾವಣೆ : ಸಿಐಟಿಯುನ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2019-12-11 16:16 GMT

ಮಂಗಳೂರು, ಡಿ.11: ಮಂಗಳೂರು ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯ 10 ಸ್ಥಾನಗಳಿಗೆ ಡಿ.21ರಂದು ನಡೆಯುವ ಚುನಾವಣೆಗೆ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) 10 ಅಭ್ಯರ್ಥಿಗಳು ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಉಪಸ್ಥಿತಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು.

ಸಾಮಾನ್ಯ ಕ್ಷೇತ್ರ ಸ್ಥಾನಕ್ಕೆ ಮುಹಮ್ಮದ್ ಮುಸ್ತಫ, ಹರೀಶ್ ಪೂಜಾರಿ, ಮಹಿಳಾ ಮೀಸಲು ಕ್ಷೇತ್ರಕ್ಕೆ ಸಿದ್ದಮ್ಮ, ಜನೆಟ್ ಲೋಬೊ, ಎಮಿಲಿಯ ಡಿಸೋಜ, ವಿಕಲಚೇತನರ ಕ್ಷೇತ್ರಕ್ಕೆ ಅಬೂಬಕರ್ ಸಿದ್ದೀಕ್, ಎಸ್ಸಿ ಮೀಸಲು ಕ್ಷೇತ್ರಕ್ಕೆ ಲಕ್ಷ್ಮೀ, ಎಸ್ಟಿ ಮೀಸಲು ಕ್ಷೇತ್ರಕ್ಕೆ ಮಾರುತಿ, ಅಲ್ಪ ಸಂಖ್ಯಾತ ಕ್ಷೇತ್ರಕ್ಕೆ ಮುಹಮ್ಮದ್ ಆಸಿಫ್, ಇತರ ಹಿಂದುಳಿದ ವರ್ಗಗಳ ಕ್ಷೇತ್ರಕ್ಕೆ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.

ಸಿಐಟಿಯುನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News