ಡಿ.16 ರಂದು ಮಾಣಿಯಲ್ಲಿ ಖುತುಬಿಯ್ಯತ್ ಹಾಗೂ ಸ್ವಲಾತ್ ವಾರ್ಷಿಕ

Update: 2019-12-13 17:23 GMT

ಮಾಣಿ, ಡಿ.13: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಮಾಣಿ ಇದರ ಆಶ್ರಯದಲ್ಲಿ ಸ್ವಲಾತ್ ಹಾಗೂ ಖುತುಬಿಯ್ಯತ್ ವಾರ್ಷಿಕ ಸಮ್ಮೇಳನ ಕಾರ್ಯಕ್ರಮವು ಡಿ.16 ರಂದು ಸೋಮವಾರ ಮಗ್ರಿಬ್ ನಮಾಝ್ ಬಳಿಕ ಮಾಣಿ ದಾರುಲ್ ಇರ್ಶಾದ್ ವಠಾರದಲ್ಲಿ ನಡೆಯಲಿದೆ. 

ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಆಶೀರ್ವಚನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಝೀರ್ ಅಮ್ಜದಿ ಸರಳಿಕಟ್ಟೆ ಸ್ವಾಗತ ಭಾಷಣ ಮಾಡಲಿದ್ದಾರೆ. ಹುಸೈನ್ ಅಹ್ಸನಿ ಮಾರ್ನಾಡ್ ಅಧ್ಯಕ್ಷತೆ ವಹಿಸಲಿದ್ದು, ಯಾಕೂಬ್ ಸಅದಿ ಇರ್ದೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶರೀಫ್ ಸಖಾಫಿ ಮಾಣಿ ಸಂದೇಶ ಪ್ರಭಾಷಣ, ಯುವ ವಾಗ್ಮಿ ಇಸಾಕ್ ಮುಸ್ಲಿಯಾರ್ ಕುಟ್ಯಾಡಿ ಮುಖ್ಯ ಪ್ರಭಾಷಣ   ಮಾಡಲಿದ್ದಾರೆ. ಸದಕತುಲ್ಲಾಹ್ ನದ್ವಿಯವರ ಗಣ್ಯ ಉಪಸ್ಥಿತಿಯಲ್ಲಿ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿರುವರು ಎಂದು ಕಾರ್ಯಕ್ರಮ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News