ಗಂಗೊಳ್ಳಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

Update: 2019-12-19 06:43 GMT

ಗಂಗೊಳ್ಳಿ, ಡಿ.14: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಶನಿವಾರ ಗಂಗೊಳ್ಳಿ ಜಾಮಿಯಾ ವೃತ್ತದಲ್ಲಿ ಧರಣಿ ನಡೆಸಲಾಯಿತು.

ಕೇಂದ್ರ ಸರಕಾರ, ಪ್ರಧಾನಿ ಹಾಗೂ ಗೃಹ ಸಚಿವರ ವಿರುದ್ಧ ಧರಣಿ ನಿರತರು ಘೋಷಣೆಗಳನ್ನು ಕೂಗಿ ಮಸೂದೆಯ ಪ್ರತಿಯನ್ನು ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ನ ಮೌಲಾನಾ ಮುಹಮ್ಮದ್ ಮುಅಝಮ್ ಕಾಸ್ಮಿ ಮಾತನಾಡಿದರು.

ಪಿಎಫ್‌ಐ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ, ಆಸಿಫ್ ಕೋಟೇಶ್ವರ, ಧರ್ಮಗುರುಗಳಾದ ಮೌಲಾನಾ ಮುಝಮ್ಮಿಲ್ ಸಾಹಬ್ ನದ್ವಿ, ತಬರೇಜ್ ಗಂಗೊಳ್ಳಿ, ಖಲೀಲ್ ಗಂಗೊಳ್ಳಿ ಉಪಸ್ಥಿತರಿದ್ದರು. ಸಿದ್ದಿಕ್ ಬುಡ್ಡ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News