ಶಿರ್ವ: ಡಿ.16ರಂದು ಮಲ್ಲಿಗೆ ಕೃಷಿ ಮಾಹಿತಿ

Update: 2019-12-14 16:07 GMT

ಉಡುಪಿ, ಡಿ.14: ಉಡುಪಿ ಜಿಲ್ಲಾ ಕೃಷಿಕ ಸಂಘ ಶಿರ್ವ ವಲಯ ಸಮಿತಿ ಆಯೋಜಿಸಿರುವ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮ ಡಿ.16ರ ಸೋಮವಾರ ಬೆಳಗ್ಗೆ 11:00ಕ್ಕೆ ಶಿರ್ವ ಹಳೇ ಇಗರ್ಜಿ ಬಳಿಯ ಮ್ಯಾಕ್ಸಿಮ್ ಪೆರ್ನಾಂಡಿಸ್ ರ ಮನೆ ವಠಾರದಲ್ಲಿ ನಡೆಯಲಿದೆ.

ಕ್ಸೇವಿಯರ್ ಫೆರ್ನಾಂಡಿಸ್ ಉದ್ಘಾಟಿಸಿ, ನಿತ್ಯಾನಂದ ನಾಯಕ್ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಗಣಪತಿ ಪ್ರಭು, ಮಾಕ್ಸಿಮ್ ಫೆರ್ನಾಂಡಿಸ್ ಭಾಗವಹಿಸಲಿದ್ದಾರೆ. ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಟ್, ಕಲ್ಲೊಟ್ಟು ರಾಘವೇಂದ್ರ ನಾಯಕ್ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News