ಒರಿಸ್ಸಾ ಮೂಲದ ವ್ಯಕ್ತಿಯ ಸಂಶಯಾಸ್ಪದ ಸಾವು

Update: 2019-12-15 16:05 GMT

ಮಲ್ಪೆ, ಡಿ.15: ಬಡಾನಿಡಿಯೂರು ಗ್ರಾಮದ ಪಂಚಾಯತ್ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ಒರಿಸ್ಸಾ ಮೂಲದ ವ್ಯಕ್ತಿಯೊಬ್ಬರು ಸಂಶಯಾಸ್ಪದ ವಾಗಿ ಮೃತಪಟ್ಟ ಘಟನೆ ಡಿ.14ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಸಂಜಯ್ ದಿವಾಕರ ಪ್ರಧಾನ್(39) ಎಂದು ಗುರುತಿಸಲಾಗಿದೆ. ಓರಿಸ್ಸಾ ಮೂಲದ ಸುಷ್ಮಾ ಪ್ರಧಾನ್, ಅವರ ಮಗಳು ಪೂಜಾ ಹಾಗೂ ಮಗ ಚಂದನ್ ಮತ್ತು ಮೈದುನ ಸಂಜಯ್ ದಿವಾಕರ ಪ್ರಧಾನ್ ಎಂಬವರು ಶ್ರೀನಿವಾಸ ಗಾಣಿಗ ಎಂಬವರ ಬಾಡಿಗೆಮನೆಯಲ್ಲಿ ವಾಸವಾಗಿದ್ದು, ಸಂಜಯ್ ದಿವಾಕರ ಪ್ರಧಾನ್ ಬಚ್ಚಲು ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಷ್ಮಾ ಪ್ರಧಾನ್ ತಿಳಿಸಿದ್ದಾರೆ. ಆದರೆ ಮೃತರು ಯಾವ ರೀತಿ ಹಾಗೂ ಯಾವ ಕಾರಣಕ್ಕೆ ಮೃತಪಟ್ಟಿರುವುದಾಗಿ ತಿಳಿದಿಲ್ಲ ಎಂದು ಶ್ರೀನಿವಾಸ ಗಾಣಿಗ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News