ದೈವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು

Update: 2019-12-15 16:14 GMT

ಹಿರಿಯಡ್ಕ, ಡಿ.15: ಬೊಮ್ಮರಬೆಟ್ಟು ಗ್ರಾಮದ ಪಡುಭಾಗ ಎಂಬಲ್ಲಿರುವ ಭಗವಾಗ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಡಿ.10ರಂದು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಸುಧಾಕರ್ ದೈವಸ್ಥಾನ ದಲ್ಲಿ ಪೂಜೆ ಮುಗಿಸಿ ಬೀಗ ಹಾಕಿ ಹೋಗಿದ್ದು, ಡಿ.14ರಂದು ಮಧ್ಯಾಹ್ನ 11:30 ಗಂಟೆಗೆ ದೈವಸ್ಥಾನಕ್ಕೆ ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ದೈವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಬಬ್ಬುಸ್ವಾಮಿ ದೈವದ ಪಂಚಲೋಹದ ಮುಖಮೂರ್ತಿ ಮತ್ತು ಎದೆಕಟ್ಟು ಕಳವು ಮಾಡಿದ್ದಾರೆ. ಇವುಗಳ ವೌಲ್ಯ 23,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News