ಮಂಗಳೂರು: ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ, ಜಶ್ನೇ ರಬೀಅ್

Update: 2019-12-16 12:00 GMT

ತೋಡಾರ್ : ಶಂಸುಲ್ ಉಲಮಾ ಅರಬಿಕ್ ಕಾಲೇಜು   ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಜಶ್ನೇ ರಬೀಅ್ ಕಾರ್ಯಕ್ರಮವು ತೋಡರ್ ಜಂಕ್ಷನ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ  ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ನೇತೃತ್ವ ವಹಿಸಿದ್ದರು. ಕೆ.ಎಂ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರು ಮೌಲಾನ ರಫೀಕ್ ಅಹ್ಮದ್ ಹುದವಿ  ಕೋಲಾರ್ ಅಧ್ಯಕ್ಷೀಯ ಭಾಷಣ ಗೈದರು. ತದನಂತರ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ನಝೀರ್ ಫೈಝಿ ತೋಡಾರ್,  ಮುಹಮ್ಮದಲಿ ಬಾಖವಿ ಉಸ್ತಾದ್,  ಶಂಸುದ್ದೀನ್  ಯಮಾನಿ ಉಸ್ತಾದ್, ಇಬ್ರಾಹೀಂ ರಝಾ ಮಿಸ್ಬಾಹಿ, ಅಬೂಬಕ್ಕರ್ ಅಝ್ಹರಿ, ಮಾಸ್ಟರ್ ಸಿರಾಜ್ ಚಕಮುಕಿ, ಮಾಸ್ಟರ್ ಅನ್ವರ್ ಕೋಲ್ಪೆ, ಇಸ್ಹಾಕ್ ಹಾಜಿ, ಸಲೀಂ ಹಂಡೇಲು ಹಾಗೂ ಇನ್ನಿತರ  ಉಲಮಾ ಉಮರಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಶಫೀಕ್  ಬಪ್ಪಳಿಗೆ ಸ್ವಾಗತಿಸಿ ಕಬೀರ್ ಅಜ್ಜಾವರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News