×
Ad

ಅಪರಿಚಿತ ವಾಹನ ಢಿಕ್ಕಿ: ಪಾದಚಾರಿ ಮೃತ್ಯು

Update: 2019-12-16 21:41 IST

ಬ್ರಹ್ಮಾವರ, ಡಿ.16: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಡೈರಿಗೆ ಹಾಲು ಕೊಡಲು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಚೇರ್ಕಾಡಿ -ಕೊಕ್ಕರ್ಣೆ ಕಾಂಕ್ರೀಟ್ ರಸ್ತೆಯ ಬೆನಗಲ್ ಎಂಬಲ್ಲಿ ಡಿ.16ರಂದು ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.

ಮೃತರನ್ನು ಸ್ಥಳೀಯರಾದ ರವಿರಾಜ ಹೆಗ್ಡೆ(74) ಎಂದು ಗುರುತಿಸಲಾಗಿದೆ. ಇವರು ದನದ ಹಾಲನ್ನು ಬೆನಗಲ್‌ನಲ್ಲಿರುವ ಹಾಲಿನ ಡೈರಿಗೆ ಕೊಡಲು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಯಾವುದೋ ಅಪರಿಚಿತ ವಾಹನ ಇವರಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಯಿತ್ತೆನ್ನಲಾಗಿದೆ.

ಇದರಿಂದ ಇವರ ತಲೆಯ ಹಿಂಭಾಗ, ಮುಖದ ಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ರವಿರಾಜ್ ಹೆಗ್ಡೆ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News