ಲೋಕ ಅದಾಲತ್-1668 ಪ್ರಕರಣ ರಾಜೀ ಇತ್ಯರ್ಥ
Update: 2019-12-16 22:09 IST
ಉಡುಪಿ, ಡಿ.16: ಉಡುಪಿ, ಕುಂದಾಪುರ ಹಾಗೂ ಕಾರ್ಕಳ ನ್ಯಾಯಾಲಯ ಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 17 ಜನತಾ ನ್ಯಾಯಾಲಯಗಳನ್ನು ಆಯೋಜಿಸಿ, ವಿಚಾರಣೆಗೆ ಬಾಕಿ ಇದ್ದ ಒಟ್ಟು 29,357 ಪ್ರಕರಣಗಳಲ್ಲಿ 1,469 ಪ್ರಕರಣಗಳನ್ನು ಹಾಗೂ 199 ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿ 9,52,56,834 ರೂ. ಪಾವತಿಸಲು ಆದೇಶಿಸಲಾುತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.