ಪ್ರತಿಭಟನಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಬಂಟ್ವಾಳ ಬಂದ್ ಗೆ ಕರೆ

Update: 2019-12-19 16:53 GMT

ಬಂಟ್ವಾಳ, ಡಿ. 19: ಮಂಗಳೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ, ಎನ್ ಆರ್ ಸಿ ಪೌರತ್ವ ಕಾಯ್ದೆ ವಿರೋಧಿ ಹೋರಾಟ ಸಮಿತಿಯು ಡಿ. 20ರಂದು ಬಂಟ್ವಾಳದಲ್ಲಿ ಶಾಂತಿಯುತ ಬಂದ್ ಆಚರಿಸಲು ಕರೆ ನೀಡಿದೆ.

ಬಂಟ್ವಾಳ, ಕೈಕಂಬ, ಬಿ.ಸಿ.ರೋಡ್, ಬಂಟ್ವಾಳ ಪೇಟೆ, ಕೆಳಗಿನಪೇಟೆ ಮುಸ್ಲಿಂ ಅಂಗಡಿಗಳಿಗೆ ಭೇಟಿ ನೀಡಿ ಬಂದ್ ಗೆ ಬೆಂಬಲ ನೀಡುವಂತೆ ವಿನಂತಿಸಲಾಗಿದ್ದು, ಸ್ವಯಂ ಪ್ರೇರಿತವಾಗಿ ಬಂದ್ ನಡೆಸುವುದಾಗಿ ವರ್ತಕರು ತಿಳಿಸಿದ್ದಾರೆ ಎಂದು ಎನ್ ಆರ್ ಸಿ ಪೌರತ್ವ ಕಾಯ್ದೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಮುಹಮ್ಮದ್ ಶಫಿ ಹಾಗೂ ಶಾಹುಲ್ ಹಮೀದ್ ಎಸ್.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News