ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
Update: 2019-12-21 15:32 GMT
ಶಂಕರನಾರಾಯಣ, ಡಿ.21: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯ ಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಯಡಮೊಗ್ಗೆ ಗ್ರಾಮದ ಕೊಳ್ಳಾಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೊಳ್ಳಾಳಿ ನಿವಾಸಿ ವಿದ್ಯಾಶ್ರೀ(30) ಎಂದು ಗುರುತಿಸಲಾಗಿದೆ. ಇವರು ಡಿ.14ರಂದು ಬೆಳಗ್ಗೆ ಮನೆಯ ಬಚ್ಚಲು ಕೋಣೆಗೆ ಬೆಂಕಿ ಮಾಡಲು ಹೋಗಿದ್ದು, ಅಲ್ಲಿ ಸೀಮೆಎಣ್ಣೆ ಡಬ್ಬವು ಕೈ ತಪ್ಪಿ ಬಿದ್ದು ಬಚ್ಚಲು ಕೊಣೆಯಯಲ್ಲಿ ಬೆಂಕಿ ಹೊತ್ತಿ ಕೊಂಡಿತ್ತೆನ್ನಲಾಗಿದೆ. ಇದರಿಂದ ಬೆಂಕಿಯಿಂದ ಸುಟ್ಟು ಗಂಭೀರ ವಾಗಿ ಗಾಯಗೊಂಡಿದ್ದ ವಿದ್ಯಾಶ್ರೀ, ಡಿ.20ರಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.