ವಿಷ ಜಂತು ಕಡಿತ: ವ್ಯಾಪಾರಿ ಮೃತ್ಯು
Update: 2019-12-21 16:46 GMT
ಬೈಂದೂರು, ಡಿ. 21: ಮರವಂತೆಯ ಜಿನಸಿನ ಅಂಗಡಿಯಲ್ಲಿ ವಿಷ ಜಂತು ಕಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮರವಂತೆಯ ಸಂಜೀವ(66) ಎಂದು ಗುರುತಿಸಲಾಗಿದೆ.
ಡಿ.18ರಂದು ಇವರು ತನ್ನ ಜಿನಸಿ ಅಂಗಡಿಯಲ್ಲಿರುವಾಗ ಯಾವುದೋ ವಿಷ ಜಂತು ಕಡಿಯಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥ ಗೊಂಡಿದ್ದ ಸಂಜೀವರನ್ನು ಡಿ.19 ರಂದು ಕುಂದಾಪು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.20ರಂದು ರಾತ್ರಿ 9:10ರ ಸುಮಾರಿಗೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.