ಬೆಂಕಿ ಅಕಸ್ಮಿಕ: ಗಾಯಾಳು ಮೃತ್ಯು
Update: 2019-12-30 16:33 GMT
ಕೋಟ, ಡಿ.30: ಕೋಟತಟ್ಟು ಗ್ರಾಮದ ಹಂದಟ್ಟು ಎಂಬಲ್ಲಿ ಡಿ.27ರಂದು ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಹಂದಟ್ಟು ನಿವಾಸಿ ಸುರೇಶ ಪೂಜಾರಿ(64) ಎಂದು ಗುರುತಿಸ ಲಾಗಿದೆ. ಇವರು ಮದ್ಯ ಸೇವನೆ ಮಾಡಿ ಮನೆಯ ಸೋಫಾದ ಮೇಲೆ ಮಲಗಿ ಬೀಡಿ ಸೇದುವಾಗ ಬೆಂಕಿ ಕಡ್ಡಿಯನ್ನು ಸೋಫಾದ ಮೇಲೆ ಎಸೆದಿದ್ದರೆನ್ನಲಾಗಿದೆ. ಇದರಿಂದ ಸೋಫಾಕ್ಕೆ ಬೆಂಕಿ ತಗಲಿ ಸುರೇಶ ಪೂಜಾರಿ ತೀವ್ರ ಸ್ವರೂಪದ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಡಿ.29ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.