ಜ.3: ಡಿವೈಎಫ್ಐ ಕೇಂದ್ರ ಸಮಿತಿ ನಿಯೋಗ ಮಂಗಳೂರಿಗೆ ಭೇಟಿ
Update: 2020-01-02 15:42 GMT
ಮಂಗಳೂರು, ಜ.2: ಡಿವೈಎಫ್ಐ ಕೇಂದ್ರ ಸಮಿತಿ ನಿಯೋಗವು ಜ.3ರಂದು ಬೆಳಗ್ಗೆ 9 :30ಕ್ಕೆ ಮಂಗಳೂರಿಗೆ ಭೇಟಿ ನೀಡಲಿದೆ.
ಡಿ.19ರ ಗೋಲಿಬಾರ್ಗೆ ಬಲಿಯಾದ ಕುಟುಂಬಗಳ, ಗಾಯಗೊಂಡ ಸಂತ್ರಸ್ತರನ್ನು ಭೇಟಿಯಾಗಲಿದೆ. ನಿಯೋಗದಲ್ಲಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷ ಅಡ್ವೊಕೇಟ್ ಮುಹಮ್ಮದ್ ರಿಯಾಝ್, ಕೇಂದ್ರ ಸಮಿತಿ ಸದಸ್ಯರಾದ ಎ.ಎ. ರಹೀಮ್, ಎಸ್.ಸತೀಶ್, ಎಸ್.ಕೆ. ಸಜೀಶ್, ಶಾಸಕ ವಿ.ಕೆ. ಸನೋಜ್ ನಿಯೋಗದಲ್ಲಿ ಇರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.