ಟೆಂಪೋ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2020-01-03 14:32 GMT

ಮಂಗಳೂರು, ಜ.3: ಗುರುಪುರ ಕೈಕಂಬ ಸಮೀಪದ ಪೊಳಲಿ ದ್ವಾರ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬೈಕ್-ಟೆಂಪೋ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಕುಂಪಲ ನಿವಾಸಿ ಸುಕುಮಾರ್ (35) ಮೃತ ಬೈಕ್ ಸವಾರ.

ಸುಕುಮಾರ್ ಅವರು ಶುಕ್ರವಾರ ಮಧ್ಯಾಹ್ನ 12:30ಕ್ಕೆ ಕೆಲಸದ ನಿಮಿತ್ತ ಕೈಕಂಬದಿಂದ ಗುರುಪುರವಾಗಿ ಮಂಗಳೂರಿನತ್ತ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರು ದಿಕ್ಕಿನಿಂದ ಕೈಕಂಬದತ್ತ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸುತ್ತಿದ್ದ ಟೆಂಪೋ ಪೊಳಲಿ ದ್ವಾರದ ಬಳಿ ಬೈಕ್‌ಗೆ ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ತಲೆ ಮತ್ತು ದೇಹದ ಇತರ ಕೆಲವೆಡೆ ಗಂಭೀರ ಗಾಯಗಳಾಗಿದ್ದ ಸುಕುಮಾರ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News