ಬ್ರಹ್ಮಾವರ: ಮಿನಿ ವಿಧಾನಸೌಧಕ್ಕೆ ಸಚಿವ ಅಶೋಕ್ ಶಿಲಾನ್ಯಾಸ

Update: 2020-01-08 16:19 GMT

ಬ್ರಹ್ಮಾವರ, ಜ.8:ಕರ್ನಾಟಕ ಸರಕಾರದ ಕಂದಾಯ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿದ ಸಹಭಾಗಿತ್ವದಲ್ಲಿ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಮಿನಿ ವಿಧಾನ ಸೌಧದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಇಂದು ನಡೆಯಿತು.

ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಮಿನಿ ವಿಧಾನಸೌಧವು 2.8 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ನೆಲಮಹಡಿ, ಮೊದಲ ಮಹಡಿ, ಟೆರೆಸ್ ಸೇರಿದಂತೆ ಒಟ್ಟು ಕಟ್ಟಡದ ವಿಸ್ತೀರ್ಣ 2657.00 ಚದರ ಮೀಟರ್ ಇರಲಿದೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಮಿನಿ ವಿಾನಸೌವು 2.8 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ನೆಲಮಹಡಿ, ಮೊದಲ ಮಹಡಿ, ಟೆರೆಸ್ ಸೇರಿದಂತೆ ಒಟ್ಟು ಕಟ್ಟಡದ ವಿಸ್ತೀರ್ಣ 2657.00 ಚದರ ಮೀಟರ್ ಇರಲಿದೆ. ನೆಲಮಹಡಿಯಲ್ಲಿ ತಹಶೀಲ್ದಾರರ ಕಚೇರಿ, 20 ಜನ ಸಾಮರ್ಥ್ಯದ ಕೋರ್ಟ್ ಹಾಲ್, ನಮ್ಮ ಪಡಸಾಲೆ/ಭೂಮಿ ಶಾಖೆ/ಸಕಾಲ, ಚುನಾವಣೆ ಸ್ಟ್ರಾಂಗ್‌ರೂಮ್, ಉಪಖಜಾನೆ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಇವಿಎಂ ದಾಸ್ತಾನು ಕೊಠಡಿ, ರೆಕಾರ್ಡ್ ಕೊಠಡಿಗಳು, ಶೌಚಾಲಯಗಳನ್ನು ಹೊಂದಿದೆ.

ಮೊದಲ ಮಹಡಿಯು ಶಾಸಕರ ಕಚೇರಿ, ಉಪ ನೋಂದಾವಣಾಧಿಕಾರಿಗಳ ಕಚೇರಿ, ಚುನಾವಣೆ ಶಾಖೆ, 130 ಜನಸಾಮರ್ಥ್ಯದ ಸಭಾಂಗಣ, ಎಡಿಎಲ್‌ಆರ್/ ಸರ್ವೇಯರ್ಸ್‌ ಶಾಖೆ, ಸಹಾಯಕ ಆಯುಕ್ತರ ಕಚೇರಿ(ಎಸಿ ಟ್ರಿಬ್ಯೂನಲ್), ರೆಕಾರ್ಡ್ ಕೊಠಡಿಗಳು, ಶೌಚಾಲಯಗಳನ್ನು ಒಳಗೊಂಡಿದೆ.

ನೂತನ ಮಿನಿ ವಿದಾನಸೌಧ ಕಟ್ಟಡ ಸುಸಜ್ಜಿತ ಸೌಲ್ಯಗಳನ್ನು ಒಳ ಗೊಂಡಿದ್ದು, ಒಳಾಂಗಣ ಪೀಠೋಪಕರಣಗಳಿಗಾಗಿ 60 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ನೀರಿನ ವ್ಯವಸ್ಥೆಗಾಗಿ ಒಂದು ಕೊಳವೆ ಬಾವಿ, 15 ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ಟ್ಯಾಂಕ್, 10 ಸಾವಿರ ಲೀಟರ್ ಸಾಮರ್ಥ್ಯದ ಒಹೆಚ್‌ಟಿ, 100 ಕೆವಿಎ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್, 62.5 ಕೆವಿಎ ಸಾಮರ್ಥ್ಯದ ಡೀಸೆಲ್ ಜನರೇಟರ್, 1 (8 ಪ್ಯಾಸೆಂಜರ್) ಲಿಪ್ಟ್ ಸಹಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ವಸತಿ, ರೇಷ್ಮೆ ಮತ್ತು ತೋಟಗಾರಿಕಾ ಸಚಿವ ವಿ. ಸೋಮಣ್ಣ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಬಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಬಾಗ ಸಹಾಯಕ ಆಯುಕ್ತ ಕೆ. ರಾಜು, ಬ್ರಹ್ಮಾವರ ತಾಲೂಕು ತಹಶೀಲ್ದಾರ ಕಿರಣ ಜಿ ಗೌರಯ್ಯ, ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಅಲ್ಲದೇ ಅಧಿಕಾರಿಗಳು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News