ಮೂಡುಬಿದಿರೆ : ರಸ್ತೆ ಅಪಘಾತಕ್ಕೆ ವೈದ್ಯ ಬಲಿ
Update: 2020-01-12 16:58 GMT
ಮೂಡುಬಿದಿರೆ: ಬೈಕ್ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಆಳ್ವಾಸ್ ಆಯುರ್ವೇದ ಕಾಲೇಜಿನ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರುಗದ್ದೆ ಬಳಿ ರವಿವಾರ ನಡೆದಿದೆ.
ಕೇರಳದ ಕೊಲ್ಲಂನ ಡಾ. ಕೃಷ್ಣಾನಂದ (24) ಮೃತರು. ಅವರು ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ರವಿವಾರ ಮೂಡುಬಿದಿರೆಯಿಂದ ಬೈಕ್ನಲ್ಲಿ ಹೊರಟಿದ್ದರು. ಕೆಸರುಗದ್ದೆಯಲ್ಲಿ ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಓವರ್ ಟೇಕ್ ಮಾಡುವ ಸಂದರ್ಭ ಬೈಕ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಅಪಘಾತದಿಂದ ವೈದ್ಯ ರಸ್ತೆಗೆ ಬಿದ್ದ ವೇಳೆ ಬಸ್ಸಿನ ಹಿಂಬದಿ ಚಕ್ರ ಅವರ ತಲೆಯ ಮೇಲೆ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಬಸ್ ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.