ಅಮ್ಮೆಂಬಳ ಉರೂಸ್‌ಗೆ ಸಂದಲ್ ಮೆರವಣಿಗೆ

Update: 2020-01-13 14:25 GMT

ಉಳ್ಳಾಲ, ಜ.13: ಬೋಳಿಯಾರ್ ಅಮ್ಮೆಂಬಳ ಜಾರದಗುಡ್ಡ ದರ್ಗಾ ಶರೀಫ್ ಉರೂಸ್‌ಗೆ ಉಳ್ಳಾಲ ಸುನ್ನಿ ಒಕ್ಕೂಟದ ವತಿಯಿಂದ ಸಂದಲ್ ಮೆರವಣಿಗೆಗೆ ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಚಾಲನೆ ನೀಡಲಾಯಿತು.

ಎಸ್ಸೆಸ್ಸೆಫ್ ಪಶ್ಚಿಮ ವಲಯಾಧ್ಯಕ್ಷ ಮುನೀರ್ ಸಖಾಫಿ ದುಆ ನೆರವೇರಿಸಿದರು. ಸುನ್ನಿ ಮುಸ್ಲಿಂ ಒಕ್ಕೂಟದ ಸಂಚಾಲಕ ಮುಸ್ತಫಾ ಅಬ್ದುಲ್ಲ ಮಾತನಾಡಿದರು.

ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಮ್, ಕುಬೈಬ್ ತಂಙಳ್, ಸೈಯದ್ ಮದನಿ ದರ್ಗಾ ಜೊತೆ ಕಾರ್ಯದರ್ಶಿ ನೌಶಾದ್ ಆಲಿ, ಉಳ್ಳಾಲ ನಗರಸಭೆಯ ಸದಸ್ಯರಾದ ಅಶ್ರಫ್, ಅಝೀಝ್, ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಮಾಜಿ ಸದಸ್ಯರಾದ ಅಶ್ರಫ್ ಕೋಡಿ, ಉಸ್ಮಾನ್ ಕಲ್ಲಾಪು, ಸ್ಥಳೀಯರಾದ ನಾಝಿಮ್ ಮುಕ್ಕಚೇರಿ, ಮುಸ್ತಫಾ ಟಿಂಬರ್, ಅಬ್ದುಲ್ ರಹ್ಮಾನ್ ಉಳ್ಳಾಲ್, ರಫೀಕ್ ಉಳ್ಳಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News