ಜಯ ಕೆ. ತಂತ್ರಿಗೆ ಶಿಕ್ಷಣ ಜ್ಞಾನಸಿಂಧು ಪ್ರಶಸ್ತಿ
Update: 2020-01-13 16:44 GMT
ಉಡುಪಿ, ಜ.13: ಶಿಕ್ಷಣ ಜ್ಞಾನ ಮಾಸಪತ್ರಿಕೆಯ 17ನೇ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಕನ್ನಡಭವನ ಗುಲ್ಬರ್ಗದಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದಲ್ಲಿ ಉದ್ಯಾವರ ಸರಕಾರಿ ಪ್ರೌಢ ಶಾಲೆಯ ಪದವೀಧರ ಸಹ ಶಿಕ್ಷಕಿ ಜಯ ತಂತ್ರಿ ಕೆ. ಇವರನ್ನು ಶಿಕ್ಷಕ ಸೇವೆಯಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ‘ಶಿಕ್ಷಣ ಜ್ಞಾನ ಸಿಂಧು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.