ಭಟ್ಕಳ ಜಾಮಿಯಾ ಇಸ್ಲಾಮಿಯಾ ಅರೆಬಿಕ್ ಮಹಾ ವಿದ್ಯಾಲಯದಿಂದ ಪೇಜಾವರಶ್ರೀಗೆ ಸಂತಾಪ

Update: 2020-01-14 18:20 GMT

ಉಡುಪಿ : ಭಟ್ಕಳ ಜಾಮಿಯಾ ಇಸ್ಲಾಮಿಯಾ ಅರೆಬಿಕ್ ಮಹಾ ವಿದ್ಯಾಲಯ ವತಿಯಿಂದ ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಇತ್ತೀಚೆಗೆ ನಿಧನರಾದ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸಂತಾಪ ಸಲ್ಲಿಸಿದರು.

ಈ ವೇಳೆ ಮಠದಲ್ಲಿದ್ದ ಪ್ರಸ್ತುತ ಪೇಜಾವರ‌ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸರ್ವ ಧರ್ಮವನ್ನು‌ಗೌರವಿಸುತಿದ್ದ ಯತಿಗಳು ದೇಶಕ್ಕೆ ಮಾದರಿ ಸಂತನಾಗಿದ್ದರು. ಶ್ರೀಗಳ‌ ನಿಧನದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಈ ಹಿಂದೆ ನಮ್ಮ ಸಂಸ್ಥೆಗೆ ಭೇಟಿ ನೀಡಿ ಶ್ರೀಗಳು ಆಶಿರ್ವಚನ‌ ನೀಡಿದ್ದು ನಮಗೆಲ್ಲರಿಗೂ ಬಹಳ ಸಂತಸವಾಗಿತ್ತು. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲು, ಶ್ರೀಗಳ ಆಗಲಿಕೆಯ ದುಃಖದಲ್ಲಿ ನಮ್ಮ ಸಂಸ್ಥೆಯ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಭಾಗಿಯಾಗಿದೆ ಎಂದು ನುಡಿ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News