​ಜ.17: ಬಜ್ಪೆಯಲ್ಲಿ ನಾಗರಿಕ ಹಕ್ಕು ಸಮಾವೇಶ

Update: 2020-01-16 16:36 GMT

ಮಂಗಳೂರು, ಜ.16: ಸಂವಿಧಾನ ಸಂರಕ್ಷಣಾ ವೇದಿಕೆ ಬಜ್ಪೆಇದರ ಅಧೀನದಲ್ಲಿ ಬಜ್ಪೆಪರಿಸರದ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜ.17ರಂದು ಬಜ್ಪೆಯಲ್ಲಿ ನಾಗರಿಕ ಹಕ್ಕು ಸಮಾವೇಶ ನಡೆಯಲಿದೆ.

ಬಜ್ಪೆಯ ಹಳೆ ಪೆಟ್ರೋಲ್ ಬಂಕ್ ಬಳಿ ಅಪರಾಹ್ನ 2:30ಕ್ಕೆ ಆರಂಭಗೊಳ್ಳುವ ಈ ಸಮಾವೇಶವನ್ನು ಬಜ್ಪೆಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಜಾವಳೆ ಉದ್ಘಾಟಿಸಲಿದ್ದಾರೆ.

ಸಮಾವೇಶದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಮೈಸೂರು, ಭವ್ಯಾ ನರಸಿಂಹಮೂರ್ತಿ, ಬಿ.ಆರ್. ಭಾಸ್ಕರ್ ಪ್ರಸಾದ್, ನ್ಯಾಯವಾದಿ ಸುನೀಲ್ ಕುಮಾರ್ ಮುರೊಳ್ಳಿ ಮಾತನಾಡಲಿದ್ದಾರೆ ಎಂದು ಪ್ರಚಾರ ಸಮಿತಿಯ ಅಬ್ದುಲ್ ಹಮೀದ್ ಬಜ್ಪೆತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News