ದೇರಳಕಟ್ಟೆಯ ಅಟೋ ಮೊಬೈಲ್ ಶಾಪ್ ಗೆ ಬೆಂಕಿ

Update: 2020-01-17 03:44 GMT

ಕೊಣಾಜೆ: ದೇರಳಕಟ್ಟೆಯ ಅಟೋ ಮೊಬೈಲ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರಬಹುದು ಎಂದು ಸಂಶಯಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ದೇರಳಕಟ್ಟೆಯ ಸುರೇಶ್ ರೈ ಮಾಲಕತ್ವದ ಈ‌ ಅಂಗಡಿ ಬೆಂಕಿಗಾಹುತಿಯಾಗಿದ್ದು, ಅಪಾರ ನಷ್ಟ‌ ಉಂಟಾಗಿದೆ‌ ಎಂದು ತಿಳಿದು ಬಂದಿದೆ.

ದೇರಳಕಟ್ಟೆ ವಿದ್ಯಾರತ್ನ ಕ್ರಾಸ್ ನಲ್ಲಿರುವ ಭಾರತ್ ಅಟೋ ಮೊಬೈಲ್ ಅಂಗಡಿ ಮಾಲಕ ಗುರುವಾರ ರಾತ್ರಿ ಎಂದಿನಂತೆ ಅಂಗಡಿ ಮುಚ್ಚಿ ತೆರಳಿದ್ದರು. ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರಬಹದು ಎಂದು ಸಂಶಯಿಸಲಾಗಿದೆ.

ಇತ್ತೀಚೆಗೆ ದೇರಳಕಟ್ಟೆ ಮೈದಾನದಲ್ಲಿ ಕುರ್ಚಿ ತುಂಬಿದ್ದ ಲಾರಿಗೆ ದುಷ್ಕರ್ಮಿಗಳು ಬೆಂಚಿ ಹಚ್ಚಿದ್ದರು. ಈ ಬಗ್ಗೆ ತನಿಖೆ ಮುಂದುವರಿಯುತ್ತಿರುವಾಗಲೇ ಇದೇ ಪರಿಸರದಲ್ಲಿ ಅಂಗಡಿಯೊಂದು ಬೆಂಕಿಗಾಹುತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News