ಕೃಷ್ಣ ಮಠದಲ್ಲಿ ಮಹಿಳೆಯ ಪರ್ಸ್ ಕಳವು

Update: 2020-01-17 16:07 GMT

ಉಡುಪಿ, ಜ.17: ಉಡುಪಿ ಶ್ರೀಕೃಷ್ಣ ಮಠದಲ್ಲಿ ಜ.15ರಂದು ಮಧ್ಯಾಹ್ನ ವೇಳೆ ಮಹಿಳೆಯೊಬ್ಬರ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಕಳವು ಮಾಡಿರುವ ಘಟನೆ ನಡೆದಿದೆ.

ಮಣಿಪಾಲ ನೇತಾಜಿ ನಗರದ ರಮೇಶ್ ಎಂಬವರ ಪತ್ನಿ ಆಶಾ(36) ಎಂಬವರು ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದು, ಅಲ್ಲಿ ಅವರ ಬ್ಯಾಗ್ ಜೀಪ್ ತೆಗೆದ ಕಳ್ಳರು, ಅದರೊಳಗಿದ್ದ ಪರ್ಸ್ ಕಳವು ಮಾಡಿದ್ದಾರೆ. ಪರ್ಸ್‌ನಲ್ಲಿ 2,000ರೂ. ನಗದು ಹಾಗೂ 25,000ರೂ. ಮೌಲ್ಯದ ಚಿನ್ನದ ಕರಿಮಣಿ ಸರ, ಎರಡು ಎಟಿಎಂ ಕಾರ್ಡ್‌ಗಳಿದ್ದು, ಕಳ್ಳರು ಆ ಎಟಿಎಂ ಕಾರ್ಡ್ ಮೂಲಕ ಸಿಂಡಿಕೇಟ್ ಬ್ಯಾಂಕ್ ಖಾತೆಯಿಂದ 21,000ರೂ. ನಗದು ಡ್ರಾ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News