ವಿಕಲಚೇತನರ ಬಸ್‌ಪಾಸ್ ನವೀಕರಣಕ್ಕೆ ಸೂಚನೆ

Update: 2020-01-17 16:30 GMT

ಉಡುಪಿ, ಜ.17: ಕ.ರಾ.ರ.ಸಾ.ಸಂಸ್ಥೆಯು ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ವಿತರಿಸುತ್ತದೆ.

2019ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ ಪಾಸುಗಳ ಅವಧಿ ಕಳೆದ ಡಿ.31ಕ್ಕೆ ಮುಕ್ತಾಯಗೊಂಡಿದ್ದು, 2020ನೇ ಸಾಲಿಗಾಗಿ ಈ ಬಸ್‌ಪಾಸು ಗಳನ್ನು ಜ.1ರಿಂದ ನವೀಕರಿಸಲು ಕ್ರಮಕೈಗೊಂಡು ಹೊಸ ಪಾಸುಗಳನ್ನು ನೀಡಲಾಗುತ್ತದೆ. ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳನ್ನು ಫಲಾನುವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2019ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆ.29ರವರೆಗೆ ಮಾನ್ಯ ಮಾಡಲಾಗುವುದು.

2019ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ಸುಪಾಸುಗಳನ್ನು ನವೀಕರಿಸಿಕೊಡಲು ಜ.23ರಂದು ಉಡುಪಿ ಘಟಕ (ನಿಟ್ಟೂರು) ಮತ್ತು 24ರಂದು ಕುಂದಾಪುರ ಘಟಕದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ದಿನಗಳಂದು ನವೀಕರಣಕ್ಕೆ ಹಾಜರಾಗಲು ಅನಾನೂಕೂಲವಾದಲ್ಲಿ ಮಂಗಳೂರು ವಿಭಾಗೀಯ ಕಚೇರಿಯಲ್ಲಿ ಪಾಸು ನವೀಕರಿಸಿಕೊಳ್ಳಬಹುದಾಗಿದೆ.

ನವೀಕರಣದ ವೇಳೆ ಹಳೆಯ ಪಾಸು ಕಾರ್ಡನ್ನು ಕಡ್ಡಾಯವಾಗಿ ಹಿಂದಿರುಗಿ ಸಬೇಕು. 660 ರೂ. ನಗದಿನೊಂದಿಗೆ ಒಂದು ಸ್ಟ್ಯಾಂಪ್ ಮತ್ತು 2 ಪಾಸ್ ಪೋರ್ಟ್ ಸೈಜಿನ ಪೋಟೋಗಳು, ಗುರುತಿನ ಚೀಟಿಯ ಮಾನ್ಯತಾ ಅವಧಿ ಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸಿದ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿ ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ ಯುಡಿಐಡಿ ಕಾರ್ಡಿನ ಮೂಲ ಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು. ಇದರೊಂದಿಗೆ ವಿಳಾಸದ ದೃಢೀಕರಣ ಕ್ಕಾಗಿ ಆಧಾರ್ ಕಾರ್ಡ್‌ನ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು.

ಪಾಸುಗಳನ್ನು ನವೀಕರಿಸಲು ಫೆ.29 ಕೊನೆಯ ದಿನವಾಗಿದೆ. ನಂತರ ನವೀಕರಿಸಲು ಬಂದ ಅರ್ಜಿಗಳನ್ನು ಪರಿಗಣಿಸಲಾಗು ವುದಿಲ್ಲ ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News