ಬಜಾಲ್ ನಂತೂರು ಮಸ್ಜಿದ್‌ನಲ್ಲಿ ಪ್ರತಿಭಟನೆ

Update: 2020-01-17 17:21 GMT

ಮಂಗಳೂರು, ಜ.17: ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ಜುಮಾ ನಮಾಝ್ ಬಳಿಕ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ಪ್ರತಿಭಟನೆಯು ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್‌ರ ನೇತೃತ್ವದಲ್ಲಿ ನಡೆಯಿತು.

ಖತೀಬ್ ಇಲ್ಯಾಸ್ ಅಮ್ಜದಿ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮುಖ್ಯ ಭಾಷಣಗೈದರು. ಫೈಸಲ್ನಗರ ಗೌಶಿಯಾ ಮಸೀದಿಯ ಖತೀಬ್ ದಾವೂದ್ ಹನೀಫ್ ಹಾಗೂ ಶಾಂತಿನಗರ ತರ್ಬಿಯತುಲ್ ಇಸ್ಲಾಂ ಮಸೀದಿಯ ಖತೀಬ್ ಯಾಸೀನ್ ಸಅದಿ ಭಾಷಣ ಮಾಡಿದರು. ಕಾರ್ಪೊರೇಟರ್ ಅಶ್ರಫ್ ಮಾತನಾಡಿದರು.
ಶಾಫಿ ಮಿಸ್ಬಾಹಿ ಸ್ವಾಗತಿಸಿ, ವಂದಿಸಿದರು.

ನಾಸಿರ್ ಫಳಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News