ಜ.19: ಸಹ್ಯಾದ್ರಿಯಲ್ಲಿ ಎಸ್‌ಪಿಬಿ ಸಂಗೀತ ಸಂಜೆ

Update: 2020-01-18 17:04 GMT

ಮಂಗಳೂರು, ಜ.18: ಖ್ಯಾತ ಗಾಯಕ ಡಾ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಜ.19ರಂದು ಸಂಜೆ 6 ಗಂಟೆಗೆ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವಿದೆ.

ರಾಜ್ಯದ ನೆರೆಸಂತ್ರಸ್ತರ ಸಹಾಯಾರ್ಥವಾಗಿ ಡಾ. ಎಸ್ಪಿಬಿ ಪಂಚಭಾಷೆಗಳಲ್ಲಿ (ಕನ್ನಡ, ತುಳು, ತೆಲುಗು, ತಮಿಳು, ಹಿಂದಿ) ಗೀತೆಗಳನ್ನು ಹಾಡಲಿದ್ದಾರೆ. ಡಿ.20ರಂದು ನಗರದ ಪುರಭವನದಲ್ಲಿ ಜರುಗಿದ್ದ ಧ್ವನಿ ಪರೀಕ್ಷೆಯಲ್ಲಿ ಕಲಾವಿದರಾದ ಜನ್ಯ, ಪ್ರಸಾದ್, ಪವಿತ್ರ ಮಯ್ಯ, ವಿಜಿತ ಉಳ್ಳಾಲ್, ಭಾಗ್ಯಶ್ರೀ, ರಕ್ಷಿತಾ ನಾಯಕ್, ಅದಿತ್ಯ ಕರ್ಕೇರಾ ಆಯ್ಕೆಯಾಗಿದ್ದು, ಅವರು ಜ.19ರಂದು ನಡೆಯುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರತಿಭೆ ಪ್ರದರ್ಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News