ಪ್ರಥಮ ಚಿಕಿತ್ಸೆ ತರಬೇತಿಗಾಗಿ ಚಿನ್ನದ ಪದಕ
Update: 2020-01-20 13:58 GMT
ಉಡುಪಿ, ಜ.20: ಜಿಲ್ಲಾ ಗೃಹ ರಕ್ಷಕದಳ ಕಾರ್ಕಳ ಘಟಕದ ಗೃಹರಕ್ಷಕ ಶಿವಪ್ರಸಾದ್ ಇವರು, ಜ.18ರವರೆಗೆ ಬೆಂಗಳೂರಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಗೃಹರಕ್ಷಕರ ಪ್ರಥಮ ಚಿಕಿತ್ಸೆ ತರಬೇತಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಶಿವಪ್ರಸಾದ್ರನ್ನು ಅವರ ಸಾಧನೆಗಾಗಿ ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ ಇವರು ಗೃಹರಕ್ಷಕ ದಳ ಸಂಸ್ಥೆಯ ವತಿ ಯಿಂದ ಅಭಿನಂದಿಸಿದ್ದಾರೆ ಎಂದು ಜಿಲ್ಲಾ ಗೃ ರಕ್ಷಕದಳದ ಪ್ರಕಟಣೆ ತಿಳಿಸಿದೆ.