ಎಸ್ಕೆಪಿಎ ಉಡುಪಿ ವಲಯ ಸದಸ್ಯರಿಗೆ ಕ್ರೀಡಾಕೂಟ
Update: 2020-01-20 14:30 GMT
ಉಡುಪಿ, ಜ.20: ಸೌತ್ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಪದಪ್ರದಾನ ಮತ್ತು 26ನೆ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ವಲಯದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾಕೂಟವನ್ನು ಜ.18 ರಂದು ಉಡುಪಿ ಜಗನ್ನಾಥ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ್ ಪೂಜಾರಿ ಉದ್ಘಾಟಿಸಿದರು. ಎಸ್.ಕೆ.ಪಿ.ಎ. ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ವಾಸುದೇವ್ ರಾವ್, ಪ್ರಸ್ತುತ ಅಧ್ಯಕ್ಷ ಅನೀಶ್ ಶೆಟ್ಟಿಗಾರ್, ನಿಯೋಜಿತ ಗೌರವಧ್ಯಕ್ಷ ಶಿವ ಕೆ.ಅಮೀನ್, ನಿಯೋಜಿತ ಅಧ್ಯಕ್ಷ ಪ್ರಕಾಶ್ ಎಸ್.ಕೊಡಂಕೂರು, ನಿಯೋಜಿತ ಕಾರ್ಯದರ್ಶಿ ಸುಕೇಶ್ ಕೆ.ಅಮೀನ್, ನಿಯೋಜಿತ ಕೋಶಧಿಕಾರಿ ಪ್ರಸಾದ್ ಜತ್ತನ್, ನಿಯೋಜಿತ ಕ್ರೀಡಾ ಕಾರ್ಯ ದರ್ಶಿ ಅಶೋಕ್ ಪುತ್ರನ್ ಉಪಸ್ಥಿತರಿದ್ದರು.
ಅನೀಶ್ ಶೆಟ್ಟಿಗಾರ್ ಸ್ವಾಗತಿಸಿದರು. ಅಶೋಕ್ ಪುತ್ರನ್ ವಂದಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.