ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2020-01-20 16:23 GMT
ಹೆಬ್ರಿ, ಜ.20: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಾರ ವಿದ್ಯಾನಗರದ ಶಂಕರ ಶೆಟ್ಟಿ(50) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡ ಜ.18ರಂದು ರಾತ್ರಿ ವೇಳೆ ಚಾರಾ ಗ್ರಾಮದ ನವೋದಯ ಶಾಲೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ಅನಾರೋಗ್ಯದಿಂದ ಬಳಲುತ್ತಿದ್ದ ಎಣ್ಣೆಹೊಳೆ ಅಮೃತ ನಗರದ ನಿವಾಸಿ ಗೋಪಾಲ ಆಚಾರಿ(65) ಎಂಬವರು ಮಾನಸಿಕವಾಗಿ ನೊಂದು ಜ.18ರಂದು ರಾತ್ರಿ ಮನೆಯ ಎದುರು ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.