ಪೊಲೀಸರ ಹೆಸರಿನಲ್ಲಿ ಚಿನ್ನಾಭರಣ ಸುಲಿಗೆ
Update: 2020-01-20 16:25 GMT
ಕುಂದಾಪುರ, ಜ.20: ಪೊಲೀಸರ ಹೆಸರಿನಲ್ಲಿ ವ್ಯಕ್ತಿಯೊಬ್ಬರಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಜ.20ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ಕುಂದಾಪುರ ಹೂವಿನ ಮಾರ್ಕೆಟ್ ಬಳಿ ನಡೆದಿದೆ.
ಕುಂದಾಪುರ ಬೋರ್ಡ್ ಹೈಸ್ಕೂಲ್ ಕಡೆಯಿಂದ ಕಪ್ಪುಬಣ್ಣದ ಬೈಕಿನಲ್ಲಿ ಮುರಳೀಧರ ಪೈ ಬಳಿ ಬಂದ ಇಬ್ಬರು, ಪೊಲೀಸರೆಂದು ಹೇಳಿ ಐಡಿ ತೋರಿಸಿ, ಚೆಕ್ ಮಾಡಬೇಕು ಎಂದು ತಿಳಿಸಿದರು. ಹಾಗೆ ಮುರಳೀಧರವರಲ್ಲಿದ್ದ ಒಟ್ಟು 20 ಗ್ರಾಂ ತೂಕದ ಚಿನ್ನದ ಉಂಗುರ, ಚಿನ್ನದ ಚೈನ್, ಚಿನ್ನದ ಬ್ರೆಸ್ಲೈಟ್ಗಳನ್ನು ಸುಲಿಗೆ ಮಾಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 60,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.