ಕದ್ರಿ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ

Update: 2020-01-20 16:58 GMT

ಮಂಗಳೂರು, ಜ.20: ಶ್ರೀಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ನಡೆಯುವ ಅನ್ನ ಸಂತರ್ಪಣೆಗೆ ಕದ್ರಿಯ ರಿಕ್ಷಾ ಚಾಲಕರು ಮತ್ತು ಮಾಲಕರು ಹಾಗೂ ಕದ್ರಿ ಪರಿಸರದ ಹಿತೈಷಿಗಳಿಂದ ಸಂಗ್ರಹಗೊಂಡ 55 ಸಾವಿರ ರೂ. ಮೌಲ್ಯದ ಹಸಿರು ಹೊರೆ ಕಾಣಿಕೆಯನ್ನು ಶನಿವಾರ ಶ್ರೀ ಕ್ಷೇತ್ರಕ್ಕೆ ಒಪ್ಪಿಸಲಾಯಿತು.

 ಈ ಸಂದರ್ಭ ಕಾರ್ಪೊರೇಟರ್ ಶಕಿಲಾ ಕಾವ, ಮನೋಹರ ಶೆಟ್ಟಿ, ಗಣೇಶ್ ಶಿರ್ವ, ಗೋಕುಲ್ ಕದ್ರಿ, ದಿನೇಶ್ ರಾಜ್ ಅಂಚನ್, ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರಾದ ದಿನೇಶ್ ದೇವಾಡಿಗ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಕೊಂಡಾಣ, ಗೌರವ ಅಧ್ಯಕ್ಷ ಹರೀಶ್ ಶೆಟ್ಟಿ ವಾಮಂಜೂರು, ಕಾರ್ಯದರ್ಶಿ ರವಿ ಕುಡುಪು, ಸದಸ್ಯರಾದ ಪದ್ಮನಾಭ ಕದ್ರಿ, ಪ್ರಸಾದ್ ಕದ್ರಿ, ಪ್ರಭಾಕರ ಕದ್ರಿ ಉಪಸ್ಥಿತರಿದ್ದರು. ನಿರಂಜನ್ ಕೆ. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News