ಬೆಂಗರೆ: ಸಿಎಎ ವಿರುದ್ಧದ ಪ್ರತಿಭಟನೆಗೆ ಉಳ್ಳಾಲದಿಂದ ದೋಣಿಯಲ್ಲಿ ತೆರಳಿದ ಸಾವಿರಾರು ಮಂದಿ

Update: 2020-01-21 10:18 GMT

ಮಂಗಳೂರು, ಜ.21: ಕಸಬಾ ಬೆಂಗರೆಯಲ್ಲಿ ಇಂದು(ಜ.21) ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಉಳ್ಳಾಲ ಕೋಟೆಪುರದಿಂದ ಸಾವಿರಾರು ಮಂದಿ ದೋಣಿಯ ಮೂಲಕ ಆಗಮಿಸಿದರು.

ಉಳ್ಳಾಲ ಕೋಟೆಪುರ ಮೀನುಗಾರರ ಸಂಘದ ವತಿಯಿಂದ ಈ ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 60ಕ್ಕೂ ಅಧಿಕ ದೋಣಿಗಳಲ್ಲಿ ಸಾವಿರಾರು ಮಂದಿ ಆಗಮಿಸಿದರು.

ಈ ಸಂದರ್ಭ ಕೋಟೆಪುರ ಜುಮಾ ಮಸೀದಿಯ ಯು.ಕೆ.ಅಬ್ಬಾಸ್, ಉಳ್ಳಾಲ ಕೋಡಿ ಮಸೀದಿಯ ಅಬ್ದುಲ್ಹಮೀದ್, ನಾಡದೋಣಿ ಸಂಘಟನೆಯ ಅಧ್ಯಕ್ಷ ಹನೀಫ್ ಮತ್ರಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News