ಚಿನ್ನಾಭರಣ ಕಳವು ಪ್ರಕರಣ : ಇಬ್ಬರು ಆರೋಪಿಗಳು ಸೆರೆ

Update: 2020-01-21 17:26 GMT

ಬಂಟ್ವಾಳ, ಜ. 21: ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ಜ. 18ರಂದು ಇಬ್ಬರು ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಅರಕಲಕೂಡು ಕೋಟೆಸಾಲುಗೇರಿ ನಿವಾಸಿಗಳಾದ ಲಕ್ಷ್ಮೀಯಮ್ಮ (60) ಮತ್ತು ಅಶ್ವಿನಿ (22) ಆರೋಪಿಗಳು. ಇವರಿಬ್ಬರೂ ಉಳಿ ಗ್ರಾಮದ ಮತ್ತು ತೆಂಕಕಜೆಕಾರು ಗ್ರಾಮದ ಮಹಿಳೆಯರಿಬ್ಬರ ಕುತ್ತಿಗೆಯಿಂದ ಸರವನ್ನು ಕಳವು ಮಾಡಿದ್ದರು ಎಂದು ದೂರು ನೀಡಲಾಗಿತ್ತು. ಆರೋಪಿಗಳಿಂದ 23 ಮತ್ತು 16 ಗ್ರಾಂ ತೂಕವುಳ್ಳ ಸರ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೊತ್ತ 1.37 ಲಕ್ಷ ರೂ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News