ಮಂಗಳೂರು: ಅದ್ವೈತ್ ಹುಂಡೈ ನೂತನ 'ಔರ' ಮಾರುಕಟ್ಟೆಗೆ ಬಿಡುಗಡೆ

Update: 2020-01-21 18:05 GMT

ಮಂಗಳೂರು : ಅದ್ವೈತ್ ಹ್ಯುಂಡೈ ಸಂಸ್ಥೆಯಲ್ಲಿ ನೂತನ ಹ್ಯುಂಡೈ ಔರ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಹ್ಯುಂಡೈ ಕಾರುಗಳ ಮಾರಾಟ ಮತ್ತು ಸೇವೆ ಮೇಲೆ ಕೇಂದ್ರಿಕೃತವಾಗಿದ್ದು ತನ್ನ ಸೇವಾ ಸಂಘಟನೆಯಿಂದ ಗ್ರಾಹಕರ ಕಾಳಜಿಗೆ ಹೆಚ್ಚಿನ ಮಹತ್ವವನ್ನು ಕೊಡುವ ಸಂಸ್ಥೆಯಾಗಿದೆ. ಅದ್ವೈತ್ ಹ್ಯುಂಡೈ ಕರ್ನಾಟಕದಲ್ಲಿ ಸುಮಾರು 20 ಶೋ ರೋಮ್ ಹಾಗೂ 30 ಸರ್ವಿಸ್ ಸ್ಟೇಷನ್‍ಗಳನ್ನು ಹೊಂದಿದೆ.

ಈ ನೂತನ ಔರ ಕಾರಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್‍ಗಳಲ್ಲಿ ಮ್ಯಾನ್ವಲ್ ಮತ್ತು ಆಟೋಮೆಟಿಕ್‍ ಗೇರ್ ಗಳೊಂದಿಗೆ ಬೆಸ್ಟ್ ಇನ್ ಹಾಗೂ ಫಸ್ಟ್ ಇನ್ ಫೀಚರ್ಸ್‍ಗಳಾದ 8 ಇಂಚು ಟಚ್ ಸ್ಕ್ರೀನ್ ಇನ್‍ಪೊರ್ಟೆನ್‍ಮೆಂಟ್ ಸಿಸ್ಟಮ್, ವೈಯರ್ ಲೆಸ್‍ ಚಾರ್ಜರ್, ಡ್ರೈವರ್ ರೇರ್ ವಿವ್ ಮೊನಿಟರ್, ಆರ್ಕಮಿ ಸೌಂಡ್ಸ್ ಮತ್ತು ಸ್ಮಾರ್ಟ್‍ ಫೋನ್ ಕನೆಕ್ಟವಿಟಿಗಳಾದ ಅ್ಯಂಡ್ರೈೂಡ್ ಆಟೋ ಮತ್ತು ಆ್ಯಪಲ್‍ ಕಾರ್ ಪ್ಲೇಗಳು ಹೊಂದಿವೆ.

ಅಡ್‍ವನ್ಸ್ ಮತ್ತು ಎಂಥೋಸಿಯಸ್ಟಿಕ್ ಪವರ್‍ಟ್ರೈನ್ ಆಫ್ಶನ್ ಗಳಾದ ಬಿ.ಎಸ್ 6 ಕಂಪ್ಲೈಂಟ್ ಪೆಟ್ರೋಲ್ ಮತ್ತು ಡಿಸೇಲ್‍ ಇಂಜಿನ್, 1ಲೀ ಪವರ್‍ಫುಲ್‍ ಟರ್ಬೋ ಪೆಟ್ರೋಲ್‍ ಇಂಜಿನ್ ಹಾಗೂ ಆಯಾ ಗ್ರಾಹಕರ ಉಪಯೋಗಕ್ಕೆ ಅನುಗುಣವಾಗಿ ಮೂರು, ನಾಲ್ಕು ಮತ್ತು ಐದು ವರ್ಷದ ಕಂಪ್ಲೀಟ್ ಪೀಸ್‍ ಆಫ್ ಮೈಂಡ್ ವ್ಯಾರಂಟಿ ಪ್ಯಾಕೇಜ್‍ಗಳು ನೂತನ ಔರ ಕಾರಿನಲ್ಲಿ ಹೊಂದಿದೆ.

ಈ ನೂತನ ಹ್ಯುಂಡೈ ಔರ ಕಾರನ್ನು '2 ಎಕ್ರೆ' ತುಳು ಚಿತ್ರದ ನಟ, ನಿರ್ದೇಶಕ ವಿಸ್ಮಯ್ ವಿನಾಯಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅದ್ವೈತ್ ಹ್ಯುಂಡೈ ನಕ್ಲಸ್ಟರ್ ಮುಖ್ಯಸ್ಥ ಶಶಿಕಾಂತ್ ಶೆಟ್ಟಿ, ಬ್ಯಾಂಚ್ ಮ್ಯಾನೇಜರ್ ಶಿವಪ್ರಸಾದ್, ಅಕೌಂಟ್ಸ್ ಮ್ಯಾನೇಜರ್  ಸುಧಾಕರ್, ಶೋ ರೋಮ್ ಮ್ಯಾನೇಜರ್ ರಾಜೇಶ್ ಉಳ್ಳಾಲ್, ಅಡ್ವಾಂಟೇಜ್ ಮ್ಯಾನೇಜರ್ ಸತೀಶ್ ಕೆ.ಬಾಡಿಶಾಪ್ ಮ್ಯಾನೇಜರ್ ರಾಘವೇಂದ್ರ, ಸೇಲ್ಸ್ ಮ್ಯಾನೇಜರ್ ಗಳಾದ ಹರ್ಷರಾಜ್ ಮತ್ತು ಮತಿಮೀನಾ ರೇಗೊ ಹಾಗೂ ಸರ್ವಿಸ್ ಮ್ಯಾನೇಜರ್ ಸುಕೇಶ್‍ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಪ್ರಸನ್ನ ಅವರು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು. ರಾಜೇಶ್ ಉಳ್ಳಾಲ್ ಸ್ವಾಗತಿಸಿದರು, ಶಿವಪ್ರಸಾದ್‍  ವಂದಿಸಿದರು. ಸತೀಶ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News