ಎಸ್.ವೈ.ಎಸ್. ಕರ್ನಾಟಕ ರಾಜ್ಯ ನೂತನ ಸಮಿತಿ ಅಸ್ತಿತ್ವಕ್ಕೆ

Update: 2020-01-21 18:30 GMT
ಉಸ್ಮಾನ್ ಸಅದಿ, ಡಾ. ಅಬ್ದುಲ್ ರಶೀದ್  ಝೈನೀ, ಅಬ್ದುಲ್ ಹಕೀಂ

ಮಂಗಳೂರು : ಮಾಣಿ- ಕೊಡಾಜೆ ಜನಪ್ರಿಯ ಗಾರ್ಡನ್ ನಲ್ಲಿ ನಡೆದ ರಾಜ್ಯ ಮಹಾಸಭೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು. ಜಿ.ಎಂ.ಎಂ.ಕಾಮಿಲ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕೆ.ಪಿ.ಹುಸೈನ್ ಸಅದಿ ಕೆಸಿರೋಡ್ ಹಾಗೂ ಕುಂಬಡಾಜೆ ಅಬೂಬಕರ್ ಫೈಝಿ ಉಪನ್ಯಾಸ ನೀಡಿದರು. ಸುನ್ನೀ‌ ಕೋ- ಆರ್ಡಿನೇಷನ್ ಸಮಿತಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಸಯ್ಯಿದ್ ಮನ್ಶರ್ ತಂಙಳ್, ಎಸ್.ಇ.ಡಿ.ಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ಶುಭ ಹಾರೈಸಿದರು. ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು.

ಈ ಸಂದರ್ಭ ಎಸ್.ವೈ.ಎಸ್. ಕರ್ನಾಟಕ ರಾಜ್ಯ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

 ಅಧ್ಯಕ್ಷರಾಗಿ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಮಂಗಳೂರು, ಜನರಲ್ ಸೆಕ್ರೆಟರಿಯಾಗಿ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್, ಟ್ರಶರರ್ ಎಂ.ಅಬ್ದುಲ್ ಹಕೀಂ ಕೊಡ್ಲಿಪೇಟೆ, ಉಪಾಧ್ಯಕ್ಷರಾಗಿ ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು, ಸಂಘಟನೆ ಮತ್ತು ತರಬೇತಿಯ ವೆಲ್ಫೇರ್ ಪ್ರೆಸಿಡೆಂಟ್ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಡೆಪ್ಯೂಟಿ ‌ಪ್ರೆಸಿಡೆಂಟ್ ಹಾಜಿ ನವಾಝ್ ಅಹ್ಮದ್ ಬಳ್ಳಾರಿ, ಶಿಕ್ಷಣ ಮತ್ತು ದಅವಾ ಕಾರ್ಯದರ್ಶಿ ಸಯ್ಯಿದ್ ಎ.ಪಿ.ಎಸ್. ಹುಸೈನುಲ್ ಅಹ್ದಲ್ ತಂಙಳ್ ಬಾಖವಿ ಉಪ್ಪಳ್ಳಿ, ಕಚೇರಿ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಸಯ್ಯಿದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ, ಪ್ರಕಾಶನ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಎಂ.ವೈ. ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಇಸಾಬಾ ಕಾರ್ಯದರ್ಶಿಯಾಗಿ ಎಂ.ಇ.ಉಮರ್ ಸಖಾಫಿ ಎಡಪ್ಪಾಲ್, ಕೊಡಗು, ಕಾರ್ಯಕ್ರಮಗಳ ನಿರ್ವಹಣೆಯ ಕಾರ್ಯದರ್ಶಿಯಾಗಿ ಅಶ್ರಫ್ ಕಿನಾರಾ ಮಂಗಳೂರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಟಿ.ಎಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ.ಕೆ.ಎಂ.ಕಾಮಿಲ್ ಸಖಾಫಿ ಕೃಷ್ಣಾಪುರ, ಹನೀಫ್ ಹಾಜಿ ಉಳ್ಳಾಲ್, ಎನ್.ಎಸ್.ಉಮರ್ ಮಾಸ್ಟರ್ ಕೆಸಿ ರೋಡ್, ಕೆ.ಇ.ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಕೆ.ಎಸ್ ಅಬೂಬಕರ್ ಸ'ಅದಿ ಮಜೂರು, ಎಂ.ಹಂಝ ಮದನಿ ಮಿತ್ತೂರು, ಸಯ್ಯಿದ್ ಎಸ್.ಎಂ.ಕೋಯ ತಂಙಳ್ ಉಜಿರೆ, ಹಾಜಿ ಸಿ.ಎ.ಕರೀಂ ಚೆನ್ನಾರ್, ಖಾಸಿಂ ಪದ್ಮುಂಜೆ, ಅಬೂಬಕರ್ ಕಡಂಗ, ಉಸ್ಮಾನ್ ಅಬ್ದುಲ್ಲಾ ಎಮ್ಮೆಮಾಡು, ಸಿ.ಎಂ.ಹಂಝ ನೆಲ್ಲಿಹುದಿಕೇರಿ, ಹಾಜಿ ಮುಹ್ಯಿದ್ದೀನ್ ಗುಡ್ ವಿಲ್ ಉಡುಪಿ, ಅಡ್ವಕೇಟ್ ಹಂಝತ್ ಹೆಜಮಾಡಿ, ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಎ. ಯೂಸುಫ್ ಹಾಜಿ ಉಪ್ಪಳ್ಳಿ, ಜೆ.ಎಸ್.ಮುಹಮ್ಮದ್ ಅಲಿ ಸಕಲೇಶಪುರ, ಅಬ್ದುಲ್ ಜಬ್ಬಾರ್ ಸ'ಅದಿ ರಿಪ್ಪನ್ ಪೇಟೆ, ಹನೀಫ್ ಬೆಜ್ಜವಳ್ಳಿ, ತೀರ್ಥಹಳ್ಳಿ, ಬಶೀರ್ ಹಾಜಿ ಪೀಣ್ಯ, ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ ಅವರನ್ನು ಆಯ್ಕೆ ಮಾಡಲಾಯಿತು.

ಡಿ.ಕೆ.ಉಮರ್ ಸಖಾಫಿ ಸ್ವಾಗತಿಸಿದರು. ಅಶ್ರಫ್ ಕಿನಾರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News