ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ನಾರಾಯಣ ಭಟ್

Update: 2020-01-22 14:52 GMT

ಮಂಗಳೂರು, ಜ.22: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಡಬ ತಾಲೂಕು ಕಸಾಪ ಘಟಕದ ಆಶ್ರಯದಲ್ಲಿ ಫೆ.28 ಹಾಗೂ 29ರಂದು ರಾಮಕುಂಜ ಪದವಿ ಪೂರ್ವ ಕಾಲೇಜಿನಲ್ಲಿ ಜರಗಲಿರುವ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾರಾಯಣ ಭಟ್ ಟಿ. ರಾಮಕುಂಜ ಆಯ್ಕೆಗೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ನಾರಾಯಣ ಭಟ್ ‘ಜೀವನ ಶಿಕ್ಷಣ’ ‘ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ‘ನಮ್ಮ ಮಕ್ಕಳು ಹೇಗಿರಬೇಕು’ ಸಹಿತ 25 ಕೃತಿಗಳನ್ನು ರಚಿಸಿರುವರು. ಅನೇಕ ಕೃತಿಗಳು ಎಳೆಂಟು ಬಾರಿ ಮರು ಮುದ್ರಣಗೊಂಡಿವೆ. ಇವರ ಸಾಧನೆಗಾಗಿ 1994ರಲ್ಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿ 2005ರಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಹಾಗೂ 2009ರಲ್ಲಿ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News