‘ಅವನು ಮೆಂಟಲ್ ಆಗಿರುತ್ತಿದ್ದರೆ ನಾವು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದೆವಾ ?’
Update: 2020-01-22 16:26 GMT
ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್ ಕೆಲಸಕ್ಕಿದ್ದ ಮಂಗಳೂರಿನ ಹೊಟೇಲ್ನ ಉನ್ನತ ದರ್ಜೆಯ ಸಿಬ್ಬಂದಿಯೊಬ್ಬರು ಹೇಳಿದ್ದು ಹೀಗೆ...
‘ಅವನು ಮೆಂಟಲ್ ಆಗಿರಲಿಲ್ಲ. ಎಲ್ಲರೂ ಹೇಗಿರುತ್ತಾರೋ ಹಾಗೇ ಇದ್ದ. ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದ. ನಮಗೆ ಆತನ ಬಗ್ಗೆ ಯಾವುದೇ ಅನುಮಾನಗಳು ಬರಲಿಲ್ಲ. ಅವನು ಮೆಂಟಲ್ ಆಗಿರುತ್ತಿದ್ದರೆ ಕೆಲಸದಲ್ಲಿ ಇಟ್ಕೊಳ್ತಿದ್ದೆವಾ ? ಅಂತಹ ಅನುಮಾನ ಬಂದಿದ್ದರೆ ಅದೂ ಕೂಡ ಬಿಲ್ಲಿಂಗ್ ಸೆಕ್ಷನ್ನಲ್ಲಿ ಏಕೆ ಇಟ್ಕೊಳ್ತಿದ್ದೆವು’ ಎಂದವರು ಪ್ರಶ್ನಿಸಿದರು.
‘ಅವನೇ ಸ್ಫೋಟಕ ಇಟ್ಟನೇ ಎಂದು ನಂಬುವುದಕ್ಕೇ ಆಗುತ್ತಿಲ್ಲ’ ಎಂದೂ ಅವರು ಹೇಳಿದರು. ಅಷ್ಟರ ಮಟ್ಟಿಗೆ ಆದಿತ್ಯ ರಾವ್ ಕೆಲಸದಲ್ಲಿ, ಸಹೋದ್ಯೋಗಿಗಳೊಂದಿಗೆ ಅನುಮಾನ ಬಾರದಂತೆ ಎಚ್ಚರಿಕೆ ವಹಿಸಿದ್ದ ಎಂದು ತಿಳಿದುಬಂದಿದೆ.