ಗುರುರಾಜ್ ಮಾರ್ಪಳ್ಳಿಗೆ ತಿಂಗಳೆ ಪ್ರಶಸ್ತಿ

Update: 2020-01-22 16:39 GMT

ಉಡುಪಿ, ಜ. 22: ಖ್ಯಾತ ರಂಗಕರ್ಮಿ, ಕವಿ, ಸಾಹಿತಿ, ಸಂಗೀತ ನಿರ್ದೇಶಕ, ಕೊಳಲು ವಾದಕ ಹಾಗೂ ಚಿಂತಕ ಗುರುರಾಜ ಮಾರ್ಪಳ್ಳಿ ಅವರನ್ನು ತಿಂಗಳೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2020ನೇ ಸಾಲಿನ ‘ತಿಂಗಳೆ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಮಾ.8ರ ಸಂಜೆ 7 ಗಂಟೆಗೆ ತಿಂಗಳೆಯಲ್ಲಿ ನಡೆಯುವ 59ನೇ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಮಾರ್ಪಳ್ಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸ ಲಾಗುವುದು ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News