ವಾಲಿಬಾಲ್: ಆಳ್ವಾಸ್ ತಂಡಗಳ ಜಯಭೇರಿ

Update: 2020-01-22 16:57 GMT

ಶಿರ್ವ, ಜ.22: ಸ್ಥಳೀಯ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಇಂದು ನಡೆದ ಮಂಗಳೂರು ವಿವಿ ಮಟ್ಟದ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾಟಗಳಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜು ತಂಡಗಳು ಜಯಭೇರಿ ಬಾರಿಸಿವೆ.

ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ 25 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟಗಳಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಪುರುಷ ಮತ್ತು ಮಹಿಳಾ ವಾಲಿಬಾಲ್ ತಂಡಗಳೆರಡೂ ಪ್ರಥಮ ಸ್ಥಾನದೊಂದಿಗೆ ಅಜೇಯವಾಗುಳಿದವು.

ಎಸ್.ಡಿ.ಎಂ. ಕಾಲೇಜು ಉಜಿರೆ (ಪುರುಷ) ಮತ್ತು ಅಲೋಸಿಯಸ್ ಕಾಲೇಜು ಮಂಗಳೂರು (ಮಹಿಳಾ) ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡವು. ಎಸ್.ಡಿ.ಎಂ. ಕಾಲೇಜು ಉಜಿರೆ (ಪುರುಷ) ಮತ್ತು ಅಲೋಸಿಯಸ್ ಕಾಲೇಜು ಮಂಗಳೂರು (ಮಹಿಳಾ) ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡವು.

ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾದ ಶಿರ್ವದ ಮುಖ್ಯ ಪ್ರಬಂಧಕ ದ್ವಾರಕೀಶ್ ಮತ್ತು ಶಿಲ್ಪಾ ನಾಯಕ್ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿವಾಕರ್ ವಿಜೇತರಿೆ ಬಹುಮಾನಗಳನ್ನು ವಿತರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂದಮುಖ್ಯಅತಿಥಿಯಾದಶಿರ್ವದಮುಖ್ಯಪ್ರಬಂಕ ದ್ವಾರಕೀಶ್ ಮತ್ತು ಶಿಲ್ಪಾ ನಾಯಕ್ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿವಾಕರ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ನಯನ ಎಂ. ಸ್ವಾಗತಿಸಿದರೆ, ಕಾಲೇಜಿನ ಕ್ರೀಡಾ ಸಲಹೆಗಾರರಾದ ಪ್ರೊ.ರಘುರಾಮ ಶೆಟ್ಟಿ ಯು.ವಂದಿಸಿದರು. ಪ್ರೊ. ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ನಯನ ಎಂ. ಸ್ವಾಗತಿಸಿದರೆ, ಕಾಲೇಜಿನ ಕ್ರೀಡಾ ಸಲಹೆಗಾರರಾದ ಪ್ರೊ.ರಘುರಾಮ ಶೆಟ್ಟಿ ಯು.ವಂದಿಸಿದರು. ಪ್ರೊ. ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ: ಬೆಳಗ್ಗೆ ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯಾಟವನ್ನು ಬ್ಯಾಂಕ್ ಆಪ್ ಬರೋಡ ಉಡುಪಿ ಪ್ರಾದೇಶಿಕ ಕಛೇರಿಯ ಮಹಾಪ್ರಬಂಧಕರಾದ ರವೀಂದ್ರ ರೈ ಎಂ. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಿ.ಸುಬ್ಬಯ್ಯ ಹೆಗ್ದೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನಯನ ಎಂ. ಸ್ವಾಗತಿಸಿ ಕ್ರೀಡಾ ನಿರ್ದೇಶಕ ಪ್ರೊ. ರಘುರಾಮ ಶೆಟ್ಟಿ ಯು ವಂದಿಸಿದರು. ಡಾ.ಮಿಥುನ್ ಚ್ರವರ್ತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News