ಜ. 26ಕ್ಕೆ ಸೌರಚಾಲಿತ ಕಂಪ್ಯೂಟರ್ ಕೇಂದ್ರ, ಇ-ಶಾಲಾ ಉದ್ಘಾಟನೆ

Update: 2020-01-23 14:58 GMT

ಉಡುಪಿ, ಜ. 23: 1925ರಲ್ಲಿ ಸ್ಥಾಪಿಸಲ್ಪಟ್ಟಿರುವ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 90 ಸಂವತ್ಸರ ಗಳನ್ನು ಪೂರೈಸಿ ಶತಮಾನೋತ್ಸವದತ್ತ ದಾಪುಗಾಲಿರಿಸಿದ್ದು, ಈ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಉಪಕ್ರಮದಲ್ಲಿ ಬೆಂಗಳೂರಿನ ಸೆಲ್ಕೋ ಪೌಂಡೇಶನ್ ಇಲ್ಲಿ ಸೌರಚಾಲಿತ ಕಂಪ್ಯೂಟರ್ ಕೇಂದ್ರ ಹಾಗೂ ‘ಇ-ಶಾಲಾ’ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಒದಗಿಸಿದೆ.

ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಸ್ಫರ್ಧೆಯ ಹೊರತಾಗಿಯೂ ಮಂದಾರ್ತಿಯ ಈ ಶಾಲೆಯಲ್ಲಿ 200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆಯುತಿದ್ದಾರೆ. ದಿ.ಕೆ.ಎಂ.ಉಡುಪ ನಿರಂತರ ಮಾರ್ಗದರ್ಶನ ಹಾಗೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ಬೆಂಬಲದಿಂದ ಶಾಲೆ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿ ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ ಉತ್ತಮ ವಿದ್ಯಾಸಂಸ್ಥೆ ಎಂದು ಹೆಗ್ಗಳಿಕೆಯನ್ನು ಹೊಂದಿದೆ.

ಇದೀಗ ಬಿವಿಟಿ ಹಾಗೂ ಸೆಲ್ಕೋ ಫೌಂಡೇಷನ್ ನೀಡಿರುವ ಸಂಪೂರ್ಣ ಸೌರ ಚಾಲಿತ ಕಂಪ್ಯೂಟರ್ ಕೇಂದ್ರ ಹಾಗೂ ಇ-ಶಾಲಾ ವ್ಯವಸ್ಥೆಯ ಉದ್ಘಾಟನೆ ಇದೇ ಜ.26ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಸೌರಚಾಲಿತ ಇ-ಶಾಲಾ ಉದ್ಘಾಟನೆಯನ್ನು ಸೆಲ್ಕೋ ಪೌಂಡೇಶನ್‌ನ ಸಿಇಒ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಜಾನಿ ಡಾ. ಹರೀಶ್ ಹಂದೆ ನೆರವೇರಿಸುವರು. ಸೌರ ಚಾಲಿತ ಕಂಪ್ಯೂಟರ್ ಕೇಂದ್ರವನ್ನು ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿಯ ಮಹಾ ಪ್ರಬಂಧಕರಾದ ಭಾಸ್ಕರ್ ಹಂದೆ ಉದ್ಘಾಟಿಸುವರು.

ಸೌರಚಾಲಿತ ಇ-ಶಾಲಾ ಉದ್ಘಾಟನೆಯನ್ನು ಸೆಲ್ಕೋ ಪೌಂಡೇಶನ್‌ನ ಸಿಇಒ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಜಾನಿ ಡಾ. ಹರೀಶ್ ಹಂದೆ ನೆರವೇರಿಸುವರು. ಸೌರ ಚಾಲಿತ ಕಂಪ್ಯೂಟರ್ ಕೇಂದ್ರವನ್ನು ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿಯ ಮಹಾ ಪ್ರಬಂಕರಾದಾಸ್ಕರ್ ಹಂದೆ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಅಶೋಕ್ ಪೈ ವಹಿಸಲಿದ್ದು, ಸೆಲ್ಕೋ ಸಂಸ್ಥೆಯ ಸಿಇಒ ಮೋಹನ್ ಭಾಸ್ಕರ ಹೆಗಡೆ, ಶಾಂತಾ ಕೆ.ಎಂ.ಉಡುಪ ಮಂದಾರ್ತಿ, ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ ಇದರ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಮಂದಾರ್ತಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶೇಡಿಕೋಡ್ಲು ವಿಠಲ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು ಎಂದು ಬಿವಿಟಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News