ಜ.24: ಮಂಗಳೂರಿಗೆ ನೀರು ಸರಬರಾಜು ಸ್ಥಗಿತ

Update: 2020-01-23 17:46 GMT

ಮಂಗಳೂರು, ಜ.23: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ತುಂಬೆ ರೇಚಕ ಸ್ಥಾವರದ ಜಾಕ್‌ವೆಲ್ ದುರಸ್ತಿ ಕಾರ್ಯ ನಡೆಯಲಿದ್ದು, ಜ.24ರಂದು ಮಂಗಳೂರು ನಗರಕ್ಕೆ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ.

ತುಂಬೆ ರೇಚಕ ಸ್ಥಾವರದ ಜಾಕ್‌ವೆಲ್‌ನಲ್ಲಿ ಮರಳು, ಕಸಕಡ್ಡಿ, ಮಡ್ಡಿ ಇತ್ಯಾದಿ ಶೇಖರಣೆಗೊಂಡಿದೆ. ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‌ವೆಲ್ ಶುಚಿಗೊಳಿಸಲು ಜ.24ರಂದು ಬೆಳಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ದುರಸ್ತಿ ಕಾರ್ಯ ನಡೆಯಲಿದೆ.

ಈ ಅವಧಿಯಲ್ಲಿ ಮಂಗಳೂರು ನಗರ ಭಾಗಶಃ ಪ್ರದೇಶ, ಕಾಟಿಪಳ್ಳ, ಸುರತ್ಕಲ್, ಕಾನ-ಬಾಳ, ಕೊಟ್ಟಾರ, ಕೂಳೂರು, ಸಸಿಹಿತ್ಲು ಇತ್ಯಾದಿ ಪ್ರದೇಶಗಳು ಹಾಗೂ ನವಭಾರತ ಸರ್ಕಲ್, ರಥಬೀದಿ, ಬಂದರ್ ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಎಂದು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News