ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ನಿಂದ 5 ಕೇಂದ್ರಗಳಲ್ಲಿ ರಕ್ತದಾನ ಶಿಬಿರ

Update: 2020-01-25 05:08 GMT

ಮಂಗಳೂರು, ಜ.25: ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಜ.26ರಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಜಿಲ್ಲೆಯ ಐದು ಕಡೆಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಉಳ್ಳಾಲ ಸೆಕ್ಟರ್ ವತಿಯಿಂದ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯ ಸಹಕಾರದಲ್ಲಿ ಮಾಸ್ತಿಕಟ್ಟೆಯಲ್ಲಿ 132ನೇ ಶಿಬಿರ ನಡೆಯಲಿದೆ. ತಲಪಾಡಿ ಸೆಕ್ಟರ್ ವತಿಯಿಂದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಕಾರದಲ್ಲಿ ಪೂಮಣ್ಣುವಿನ ಅನ್ಸಾರ್ ನಗರದ ದಾರುಸ್ಸುನ್ನ ಮದ್ರಸದಲ್ಲಿ 133ನೇ ಶಿಬಿರ, ಮಡಂತ್ಯಾರ್ ಸೆಕ್ಟರ್ ವತಿಯಿಂದ ಮಡಂತ್ಯಾರ್ ನೂರುಲ್ ಹುದಾ ಮದ್ರಸದಲ್ಲಿ 134ನೇ ಶಿಬಿರ, ಉಜಿರೆ ಸೆಕ್ಟರ್ ವತಿಯಿಂದ ಉಜಿರೆ ಹಳೆಪೇಟೆಯ ಬದ್ರುಲ್ ಹುದಾ ಮದ್ರಸದಲ್ಲಿ 135ನೇ ಶಿಬಿರ, ಚಿಕ್ಕಮಗಳೂರು ಮಾಗುಂಡಿ ಮಸೀದಿ ವಠಾರದಲ್ಲಿ ಮಾಗುಂಡಿ ಸೆಕ್ಟರ್ ವತಿಯಿಂದ 136ನೇ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News