ಆದಿತ್ಯ ರಾವ್ ನನ್ನು ಉಡುಪಿಯ ಬ್ಯಾಂಕಿಗೆ ಕರೆದೊಯ್ದು ವಿಚಾರಣೆ

Update: 2020-01-25 08:33 GMT

ಉಡುಪಿ, ಜ.25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಶಂಕಿತ ಉಗ್ರ ಆದಿತ್ಯ ರಾವ್ ನನ್ನು ಮಹಜರು ನಡೆಸುವ ಉದ್ದೇಶದಿಂದ ಮಂಗಳೂರು ಪೊಲೀಸರು ಇಂದು ಉಡುಪಿಗೆ ಕರೆತಂದಿದ್ದಾರೆ.

ಈತ ಕಡಿಯಾಳಿಯಲ್ಲಿರುವ ಕರ್ಣಾಟಕ ಬ್ಯಾಂಕ್ ನಲ್ಲಿ ಲಾಕರ್ ಪಡೆದಿದ್ದ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಕರೆ ತಂದಿದ್ದರು.

ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ ನನ್ನು  ಬ್ಯಾಂಕಿನೊಳಗೆ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಹೊರಗಡೆ ಬ್ಯಾಂಕ್ ಶೆಟರ್ ಹಾಕಿ ಪೊಲೀಸರು ಆದಿತ್ಯ ಲಾಕರ್ ನಲ್ಲಿಟ್ಟಿದ್ದ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News