ಕುಂಜತ್ಕಲ: ಜ.26 ರಂದು ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮತ ಪ್ರವಚನ

Update: 2020-01-25 11:45 GMT

ಫರಂಗಿಪೇಟೆ : ನೂರುಲ್ ಹುದಾ ಮದರಸ ಮತ್ತು ಮಸೀದಿ ಕುಂಜತ್ಕಲ, ಫರಂಗಿಪೇಟೆ ಇದರ ಆಶ್ರಯದಲ್ಲಿ ಜ. 26ರಂದು ಸಂಜೆ 7 ಗಂಟೆಗೆ ಏಕದಿನ ಮತ ಪ್ರವಚನ ಹಾಗೂ ಸಭಾ ಕಾರ್ಯಕ್ರಮ ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ವೇದಿಕೆ ಕುಂಜತ್ಕಳ ಮೈದಾನದಲ್ಲಿ ನಡೆಯಲಿದೆ.

ಸಯ್ಯದ್ ಸಮೀರ್ ಅಲಿ ಶಿಯಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟನೆ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಪ್ರವಚನಕಾರ ಹಾಫಿಲ್ ಸಿರಾಜುದ್ದೀನ್ ಕಾಸಿಮಿ ಪತ್ತನಾಪುರಂ ಕೇರಳ ಇವರು ಮುಖ್ಯ ಭಾಷಣ ಮಾಡಲಿದ್ದಾರೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಮದರಸ ಕುಂಜತ್ಕಳ ಅಧ್ಯಕ್ಷ ಯುಎಚ್ ಅಶ್ರಫ್ ವಹಿಸಲಿದ್ದಾರೆ, ನೂರುಲ್ ಹುದಾ ಮದರಸ ಕುಂಜತ್ಕಳ ಸದರ್ ಮುಅಲ್ಲಿಂ ಅಬೂಬಕರ್ ಫೈಝಿ ಸ್ವಾಗತ ಮಾಡಲಿದ್ದಾರೆ, ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕಲ್ಲೇಗ ಮಸೀದಿ ಮುದರಿಸ್ ಅಬೂಬಕರ್ ಸಿದ್ದಿಕ್ ಜಲಾಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಯುಟಿ ಖಾದರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಮಮ್ತಾಝ್ ಅಲಿ ಖಾನ್, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಟಿಕೆ ಎಂಟರ್ ಪ್ರೈಸಸ್ ಮಾಲಕ ಬಶೀರ್, ನೂರುಲ್ ಹುದಾ ಮದರಸ ಕುಂಜತ್ಕಳ ಉಪಾಧ್ಯಕ್ಷ ಮೊಹಮ್ಮದ್ ಹನೀಫ್, ಅರಫಾ ಗ್ರೂಪ್ ತುಂಬೆ ಅಬ್ದುಲ್ ಲತಿಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ನಷಾತುದ್ದೀನ್ ಯಂಗ್ ಫೆಡರೇಷನ್ ಅಧ್ಯಕ್ಷ ಹಾಗೂ ಪುದು ಗ್ರಾಮ ಪಂ ಸದಸ್ಯ ಅಬೂಬಕರ್ ನಝೀರ್, ಕೆಇಎಲ್ ಇಸ್ಮಾಯಿಲ್, ಹಾಜಿ ಜೆ ಮೊಹಮ್ಮದ್ ಇಶಾಕ್, ಹಾಜಿ ಕೆ ಎಸ್ ಮುಸ್ತಫಾ, ಹಾಜಿ ಸುಲೈಮಾನ್ ಕೆಬಿಆರ್, ಅಷ್ಫಾಕ್ ಕುದ್ರೋಳಿ ಎಎಸ್ಆರ್, ಮೊಹಮ್ಮದ್ ಅಲ್ತಾಫ್ ಆರ್ ಝೆಡ್, ಹಾಜಿ ಅಬ್ದುಲ್ ರಝಾಕ್ ಬಿಸಿರೋಡ್,  ಎಸ್ಕೆಎಸ್ಎಸ್ಎಫ್ ಮೂಡಬಿದ್ರೆ ವಲಯ ಅಧ್ಯಕ್ಷ ಮಾಲಿಕ್ ಅಝೀಝ್  ಹಾಗೂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನೂರುಲ್ ಹುದಾ ಮದರಸ ಅಧ್ಯಕ್ಷ ಯುಎಚ್ ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News