ಡಾ.ಎನ್.ಉಡುಪರಿಗೆ ರಾಷ್ಟ್ರೀಯ ಪ್ರಶಸ್ತಿ

Update: 2020-01-25 14:46 GMT

 ಮಣಿಪಾಲ, ಜ.25: ಮಾಹೆಯ ಹೆಲ್ತ್ ಸಾಯನ್ಸ್ ವಿಭಾಗದ ನಿರ್ದೇಶಕ (ಸಂಶೋಧನೆ) ಡಾ.ನಯನಾಭಿರಾಮ ಉಡುಪ ಅವರಿಗೆ ಮುಂಬೈಯ ಅಖಿಲ ಭಾರತ ಔಷಧೀಯ ಉತ್ಪಾದನಾ ಸಂಸ್ಥೆ ಅವರ ಸಂಶೋಧನೆಗಾಗಿ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮುಂಬೈಯಲ್ಲಿ ಐಡಿಎಂಎ ಹಾಗೂ ಅಖಿಲ ಭಾರತೀಯ ಔಷಧ ಸಂಸ್ಥೆಯ ‘ಇಂಡಿಯನ್ ಡ್ರಗ್ಸ್’ ಪರವಾಗಿ ನಡೆದ ವಿಶೇಷ ಕಾರ್ಯ ಕ್ರಮದಲ್ಲಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾದ ಡಾ.ಎನ್.ಉಡುಪ ಅವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಐಡಿಎಂಎ ಪರವಾಗಿ ಅದರ ಕಾರ್ಯದರ್ಶಿ ಡಾ.ಜಾರ್ಜ್ ಪಠಾಣ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಭಾರತ ಔಷಧ ನಿಯಂತ್ರಣ ನಿರ್ದೇಶಕ ಡಾ.ವಿ.ಜಿ.ಸೋಮಾನಿ ಪ್ರಶಸ್ತಿ ವಿತರಿಸಿದರು. ಸಹ ನಿರ್ದೇಶಕ ಡಾ. ಈಶ್ವರ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News