ತೆಂಕನಿಡಿಯೂರು: ರಾಷ್ಟ್ರೀಯ ಮತದಾರರ ದಿನ
ಉಡುಪಿ ಜ.27: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ ಮಾತನಾಡಿ, ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾನ ಅರಿವು ಕಾರ್ಯಕ್ರಮದ ಪ್ರಯೋಜನವನ್ನು ಯುವಜನತೆ ಪಡೆದು ತಮ್ಮ ಪರಿಸರದಲ್ಲಿ ಮತದಾನದ ಅರಿವನ್ನು ಮೂಡಿಸಿ, ತಮಗೆ ಯಾವುದೇ ಕೆಲಸವಿದ್ದರೂ ಮತದಾನದ ದಿನದಂದು ಬಿಡುವು ಮಾಡಿಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಸುರೇಶ್ ರೈ ಕೆ. ಮಾತನಾಡಿ, ನಮ್ಮ ಸಂವಿಧಾನ ಆಶಯವನ್ನು ಅರಿತು ಮತದಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರುತ್ವವನ್ನು ಯಸ್ವಿಗೊಳಿಸಬೇಕು ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮಂಜುನಾಥ ಪ್ರಮಾಣ ವಚನ ಬೋಧಿಸಿ ದರು. ವಿದ್ಯಾರ್ಥಿ ಪರಶುರಾಮ್ ಸ್ವಾಗತಿಸಿದರು. ಪರಪ್ಪ ಕಾರ್ಯಕ್ರಮ ನಿರೂಪಿಸಿದರು. ರೇಂದ್ರ ಗೌಡ ವಂದಿಸಿದರು