ಅಮರನಾಥ ಶೆಟ್ಟಿ ನಿಧನ: ಸಿಪಿಐಎಂ ಸಂತಾಪ

Update: 2020-01-27 15:07 GMT

ಉಡುಪಿ, ಜ.27: ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ನಿಧನಕ್ಕೆ ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಸಮಾಜವಾದಿ ಹಿನ್ನಲೆಯಲ್ಲಿ ಬಂದಿರುವ ಕೆಲವು ರಾಜಕಾರಣಿಗಳು ಧರ್ಮಾಧಾರಿತ ರಾಜಕೀಯಕ್ಕೆ ಸಿಲುಕಿ ಪಕ್ಷಾಂತರ ಮಾಡಿದರೂ ದಿ.ಅಮರನಾಥ ಶೆಟ್ಟಿ, ಸ್ವಹಿತಾಸಕ್ತಿಗಾಗಿ ಪಕ್ಷಾಂತರ ಮಾಡದೇ ಕೊನೆವರೆಗೂ ಜಾತ್ಯಾತೀತ ರಾಜಕಾರಣದಲ್ಲಿ ನಂಬಿಕೆಯಿಟ್ಟು ಬದುಕಿದವರು. ಅವರ ಅಗಲುವಿಕೆಯಿಂದ ಜಾತ್ಯಾತೀತ ರಾಜಕಾರಣಕ್ಕೆ ನಷ್ಟವಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃ್ಣ ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಸೊರಕೆ ಸಂತಾಪ: ಜೆಡಿಎಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News