ಹರೇಕಳ ಹಾಜಬ್ಬರಿಗೆ ಮಾಜಿ ಪ್ರಧಾನಿ ದೇವೇಗೌಡ ಸನ್ಮಾನ
Update: 2020-01-27 15:19 GMT
ಮಂಗಳೂರು, ಜ.27: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸನ್ಮಾನಿಸಿದರು.
ಮರವೂರು ಮಸೀದಿಯ ಹೊರಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಬಿ.ಎಂ. ಮುಮ್ತಾಝ್ ಅಲಿ, ಜೆಡಿಎಸ್ ಮುಖಂಡರಾದ ವಿಟ್ಲ ಮುಹಮ್ಮದ್ ಕುಂಞಿ, ಎಂ.ಬಿ. ಸದಾಶಿವ, ಅಕ್ಷಿತ್ ಸುವರ್ಣ, ಫೈಝಲ್ ರಹ್ಮಾನ್ ಉಪಸ್ಥಿತರಿದ್ದರು.