ಜುಗಾರಿ: ನಾಲ್ಕು ಮಂದಿ ಬಂಧನ
Update: 2020-01-27 16:19 GMT
ಉಡುಪಿ, ಜ.27: ನಗರದ ಮಿಷನ್ ಕಂಪೌಂಡ್ ಯುಬಿಎಂಸಿ ಚರ್ಚ್ ರಸ್ತೆಯ ಬಳಿ ಜ.26ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ರವಿ(41), ಬಸವರಾಜ(28), ಯಲ್ಲಪ್ಪ ಲಕ್ಷ್ಮಣ ಮುತ್ತಗಿ(21), ಬಸವರಾಜ(40) ಬಂಧಿತ ಆರೋಪಿಗಳು. ಇವರಿಂದ 1,600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.