ಸಿಐಎಸ್‌ಎಫ್ ವತಿಯಿಂದ ಅಶಕ್ತರಿಗೆ ನೆರವು

Update: 2020-01-28 15:27 GMT

 ಮಂಗಳೂರು, ಜ.28: ನಿರ್ಗತಿಕರ ಜೀವನಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಎನ್‌ಎಂಪಿಟಿ ಘಟಕದ ವತಿಯಿಂದ ಬೈಕಂಪಾಡಿ ಮೀನಕಳಿಯದಲ್ಲಿ ನೆರವು ವಿತರಣಾ ಶಿಬಿರ ನಡೆಯಿತು.

 ಏಕ್ ಭಾರತ್ ಶ್ರೇಷ್ಟ್ರ ಭಾರತ್ ಅಭಿಯಾನದಡಿಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೆಪ್ಯೂಟಿ ಕಮಾಂಡೆಂಟ್ ಅಶುತೋಷ್ ಗೌರ್, ಸುತ್ತಮುತ್ತಲಿನವರ ಜೀವನವನ್ನು ರಕ್ಷಿಸುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭ ಶಾಲಾ ಚೀಲಗಳು, ಸೀರೆ, ಶರ್ಟ್, ಲುಂಗಿ, ಟವೆಲ್ ಮತ್ತು ಪಾದರಕ್ಷೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂರಾಕ್ಷಿಕಾ ಅಧ್ಯಕ್ಷೆ ಆರತಿ ಪಾಠಕ್ ಗೌರ್, ಎನ್‌ಎಂಪಿಟಿ ಸಿಐಎಸ್‌ಎಫ್ ಘಟಕದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News